Skip to content
Billava News

ಆಟಿದ ನೆಂಪು–2026: ಪವರ್‌ಲಿಫ್ಟಿಂಗ್ ಸಾಧಕಿ ಅಕ್ಷತಾ ಪೂಜಾರಿಗೆ ಯುವವಾಹಿನಿ ಬಜಪೆ ಘಟಕದಿಂದ ಸನ್ಮಾನ

ಆಟಿದ ನೆಂಪು–2026" ಕಾರ್ಯಕ್ರಮದಲ್ಲಿ ಕರಾವಳಿಯ ಹೆಮ್ಮೆಯ ಪವರ್‌ಲಿಫ್ಟಿಂಗ್ ಕ್ರೀಡಾಸಾಧಕಿ ಶ್ರೀಮತಿ ಅಕ್ಷತಾ ಪೂಜಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಆಟಿದ ನೆಂಪು–2026: ಪವರ್‌ಲಿಫ್ಟಿಂಗ್ ಸಾಧಕಿ ಅಕ್ಷತಾ ಪೂಜಾರಿಗೆ ಯುವವಾಹಿನಿ ಬಜಪೆ ಘಟಕದಿಂದ ಸನ್ಮಾನ

ಬಜ್ಪೆ, ಜುಲೈ 19: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ "ಆಟಿದ ನೆಂಪು–2026" ಕಾರ್ಯಕ್ರಮದಲ್ಲಿ ಕರಾವಳಿಯ ಹೆಮ್ಮೆಯ ಪವರ್‌ಲಿಫ್ಟಿಂಗ್ ಕ್ರೀಡಾಸಾಧಕಿ ಶ್ರೀಮತಿ ಅಕ್ಷತಾ ಪೂಜಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬಡತನದ ಸವಾಲುಗಳನ್ನು ಮೆಟ್ಟಿ ನಿಂತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪವರ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಅಕ್ಷತಾ ಪೂಜಾರಿ ಅವರ ಸಾಧನೆಯನ್ನು ಗುರುತಿಸಿ ಈ ಗೌರವ ಪ್ರದಾನ ಮಾಡಲಾಯಿತು.

ಉಡುಪಿ ಜಿಲ್ಲೆಯ ಬೋಳ ಗ್ರಾಮದವರಾದ ಅಕ್ಷತಾ ಪೂಜಾರಿ ಅವರು 2025ರಲ್ಲಿ ಪ್ರಶಾಂತ್ ಎಸ್. ಸುವರ್ಣ ಅವರನ್ನು ವಿವಾಹವಾಗಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಮೇಗಿನ ಉಳಿರೋಡಿ ಗ್ರಾಮದ ಸೊಸೆಯಾಗಿ ಅಲ್ಲಿನ ಜನರ ಹೆಮ್ಮೆಗೂ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ ಬಜಪೆ ಘಟಕದ ಪದಾಧಿಕಾರಿಗಳು, ಜೀವನದ ಸಂಕಷ್ಟಗಳನ್ನು ಮೆಟ್ಟಿ ನಿಂತು ನೂರಾರು ಕಿಲೋ ತೂಕದ ಕಬ್ಬಿಣದ ಸಲಾಕೆಗಳನ್ನು ಎತ್ತಿ ದೇಶಕ್ಕೆ ಕೀರ್ತಿ ತಂದಿರುವ ಅಕ್ಷತಾ ಪೂಜಾರಿ ಅವರ ಸಾಧನೆ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ ಎಂದು ಅಭಿನಂದಿಸಿದರು.

ಸಭೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಅಕ್ಷತಾ ಪೂಜಾರಿ ಅವರಿಗೆ ಸನ್ಮಾನಿಸಿ, ಅವರ ಮುಂದಿನ ಜೀವನದಲ್ಲಿ ಇನ್ನಷ್ಟು ಯಶಸ್ಸು, ಸುಖ-ಸಂತೋಷ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಲಾಯಿತು.

Found this useful? Share it.
Share

Relatedಸಂಬಂಧಿತ

ಶ್ರೀ ಎಲ್.ವಿ. ಅಮೀನ್ ಅವರ 75ನೇ ಜನ್ಮದಿನ: 'ಲೋಕ ಸೇವಕ ಎಲ್.ವಿ. ಅಮೀನ್' ಗೌರವ ಗ್ರಂಥ ಪ್ರಕಟಣೆ ಸಮಾಜಸೇವೆಗೆ ಸಂದ ಗೌರವ
Billava News

ಶ್ರೀ ಎಲ್.ವಿ. ಅಮೀನ್ ಅವರ 75ನೇ ಜನ್ಮದಿನ: 'ಲೋಕ ಸೇವಕ ಎಲ್.ವಿ. ಅಮೀನ್' ಗೌರವ ಗ್ರಂಥ ಪ್ರಕಟಣೆ ಸಮಾಜಸೇವೆಗೆ ಸಂದ ಗೌರವ

ಬಜ್ಪೆ: ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನ ಹೆಸರಾಂತ ಉದ್ಯಮಿ, ಸಮಾಜ ಸಂಘಟಕ ಹಾಗೂ ಬಜ್ಪೆ ದೊಡ್ಡಿಕಟ್ಟ ಮನೆತನದ ಹೆಮ್ಮೆಯ ಪುತ್ರರಾದ ಶ್ರೀ ಎಲ್.ವಿ. ಅಮೀನ್ ಅವರ ಜೀವನ ಸಾಧನೆಯನ್ನು ಆಧರಿಸಿದ "ಲೋಕ ಸೇವಕ ಎಲ್.ವಿ. ಅಮೀನ್" ಗೌರವ ಗ್ರಂಥವನ್ನು ಮುಂಬೈ ...

16h ago
ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಸಚಿನ್ ಪೂಜಾರಿ ಹೇರೂರು ಆಯ್ಕೆ
Billava News

ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಸಚಿನ್ ಪೂಜಾರಿ ಹೇರೂರು ಆಯ್ಕೆ

ಬಿಲ್ಲವವಾಣಿ ವತಿಯಿಂದ ಶ್ರೀ ಸಚಿನ್ ಪೂಜಾರಿ ಹೇರೂರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಮುಂದಿನ ಜೀವನ ಹಾಗೂ ನಾಯಕತ್ವದ ಪಯಣ ಉಜ್ವಲ...

20h ago
ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ
Billava News

ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ

ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಯುವವಾಹಿನಿ(ರಿ.)ಬಜಪೆ ಘಟಕದ ವತಿಯಿಂದ ಹಾಗೂ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ

23h ago
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ: ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಗೆ ಆಹ್ವಾನ
Billava News

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ: ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಗೆ ಆಹ್ವಾನ

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

23h ago