Skip to content
Billava News

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ: ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಗೆ ಆಹ್ವಾನ

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ: ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಗೆ ಆಹ್ವಾನ

ಉಡುಪಿ, ಜುಲೈ 20: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಪದವಿ ಪೂರ್ವ (PUC) ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು.

WhatsApp Image 2026-07-20 at 8.27.16 AM.jpeg

ಸ್ಪರ್ಧೆಯ ವಿಷಯ "ನಾರಾಯಣ ಗುರುಗಳ ಜೀವನ ಮತ್ತು ತತ್ವಾದರ್ಶಗಳು ಭಾರತೀಯ ಸಮಾಜಕ್ಕೆ ದಿಕ್ಸೂಚಿ" ಆಗಿದೆ.

ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನ ₹15,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ₹10,000 ಹಾಗೂ ಶಾಶ್ವತ ಫಲಕ, ತೃತೀಯ ಬಹುಮಾನ ₹5,000 ಹಾಗೂ ಶಾಶ್ವತ ಫಲಕ ನೀಡಲಾಗುತ್ತದೆ.

ಪ್ರತಿ ವಿಭಾಗದಿಂದ ಅತ್ಯುತ್ತಮ 10 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸ್ಪರ್ಧಿಗಳಿಗೆ 2026ರ ಆಗಸ್ಟ್ 30ರಂದು (ಭಾನುವಾರ) ಬೆಳಿಗ್ಗೆ 9.00 ಗಂಟೆಯಿಂದ ಉಡುಪಿಯ ಬನ್ನಂಜೆಯಲ್ಲಿರುವ ಬಿಲ್ಲವರ ಸೇವಾ ಸಂಘ (ರಿ.) ಸಭಾಂಗಣದಲ್ಲಿ ನೇರ ಭಾಷಣ ಸ್ಪರ್ಧೆ ನಡೆಯಲಿದೆ.

ವಿಡಿಯೋ ಸಲ್ಲಿಕೆಗೆ ಜುಲೈ 25ರಿಂದ ಅವಕಾಶವಿದ್ದು, ಆಗಸ್ಟ್ 10 ಕೊನೆಯ ದಿನಾಂಕವಾಗಿದೆ. ಭಾಷಣವು ಕನ್ನಡದಲ್ಲಿದ್ದು, ನಿಗದಿತ ವಿಷಯಕ್ಕೆ ಸಂಬಂಧಿಸಿರಬೇಕು. ಅವಧಿ 3ರಿಂದ 4 ನಿಮಿಷಗಳೊಳಗಿರಬೇಕು. ವಿಡಿಯೋವನ್ನು ಯಾವುದೇ ಎಡಿಟಿಂಗ್ ಇಲ್ಲದೆ ಸಿಂಗಲ್ ಟೆಕ್‌ನಲ್ಲಿ, ಲ್ಯಾಂಡ್‌ಸ್ಕೇಪ್ (ಅಡ್ಡ) ಮಾದರಿಯಲ್ಲಿ HD ಅಥವಾ Full HD ಗುಣಮಟ್ಟದಲ್ಲಿ ಚಿತ್ರೀಕರಿಸುವುದು ಕಡ್ಡಾಯವಾಗಿದೆ. ಸ್ಪರ್ಧಿಯು ಭಾಷಣದ ಆರಂಭದಲ್ಲಿ ತನ್ನ ಹೆಸರು, ತರಗತಿ/ಪದವಿ ಹಾಗೂ ಶಿಕ್ಷಣ ಸಂಸ್ಥೆಯ ಹೆಸರನ್ನು ಪರಿಚಯಿಸಬೇಕು.

ಭಾಷಣವು ಸ್ಪರ್ಧಿಯ ಸ್ವಂತ ಅಭಿವ್ಯಕ್ತಿಯಾಗಿರಬೇಕು. ನಕಲು, ಕೃತಿಚೌರ್ಯ ಅಥವಾ ಕೃತಕ ಬುದ್ಧಿಮತ್ತೆ (AI) ಮೂಲಕ ಸಿದ್ಧಪಡಿಸಿದ ವಿಷಯವನ್ನು ಬಳಸಬಾರದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಸ್ಪರ್ಧಿಗಳು ತಮ್ಮ ವಿಡಿಯೋವನ್ನು 9844733973 ಅಥವಾ 7829504709 ಸಂಖ್ಯೆಗಳ ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9902354807 ಸಂಖ್ಯೆಯನ್ನು ಸಂಪರ್ಕಿಸಬಹುದು.

ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಪ್ರಕಟಣೆಯಲ್ಲಿ ಕೋರಿದೆ.

Found this useful? Share it.
Share

Relatedಸಂಬಂಧಿತ

ಶ್ರೀ ಎಲ್.ವಿ. ಅಮೀನ್ ಅವರ 75ನೇ ಜನ್ಮದಿನ: 'ಲೋಕ ಸೇವಕ ಎಲ್.ವಿ. ಅಮೀನ್' ಗೌರವ ಗ್ರಂಥ ಪ್ರಕಟಣೆ ಸಮಾಜಸೇವೆಗೆ ಸಂದ ಗೌರವ
Billava News

ಶ್ರೀ ಎಲ್.ವಿ. ಅಮೀನ್ ಅವರ 75ನೇ ಜನ್ಮದಿನ: 'ಲೋಕ ಸೇವಕ ಎಲ್.ವಿ. ಅಮೀನ್' ಗೌರವ ಗ್ರಂಥ ಪ್ರಕಟಣೆ ಸಮಾಜಸೇವೆಗೆ ಸಂದ ಗೌರವ

ಬಜ್ಪೆ: ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನ ಹೆಸರಾಂತ ಉದ್ಯಮಿ, ಸಮಾಜ ಸಂಘಟಕ ಹಾಗೂ ಬಜ್ಪೆ ದೊಡ್ಡಿಕಟ್ಟ ಮನೆತನದ ಹೆಮ್ಮೆಯ ಪುತ್ರರಾದ ಶ್ರೀ ಎಲ್.ವಿ. ಅಮೀನ್ ಅವರ ಜೀವನ ಸಾಧನೆಯನ್ನು ಆಧರಿಸಿದ "ಲೋಕ ಸೇವಕ ಎಲ್.ವಿ. ಅಮೀನ್" ಗೌರವ ಗ್ರಂಥವನ್ನು ಮುಂಬೈ ...

16h ago
ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಸಚಿನ್ ಪೂಜಾರಿ ಹೇರೂರು ಆಯ್ಕೆ
Billava News

ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಸಚಿನ್ ಪೂಜಾರಿ ಹೇರೂರು ಆಯ್ಕೆ

ಬಿಲ್ಲವವಾಣಿ ವತಿಯಿಂದ ಶ್ರೀ ಸಚಿನ್ ಪೂಜಾರಿ ಹೇರೂರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಮುಂದಿನ ಜೀವನ ಹಾಗೂ ನಾಯಕತ್ವದ ಪಯಣ ಉಜ್ವಲ...

20h ago
ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ
Billava News

ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ

ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಯುವವಾಹಿನಿ(ರಿ.)ಬಜಪೆ ಘಟಕದ ವತಿಯಿಂದ ಹಾಗೂ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ

23h ago
ಆಟಿದ ನೆಂಪು–2026: ಪವರ್‌ಲಿಫ್ಟಿಂಗ್ ಸಾಧಕಿ ಅಕ್ಷತಾ ಪೂಜಾರಿಗೆ ಯುವವಾಹಿನಿ ಬಜಪೆ ಘಟಕದಿಂದ ಸನ್ಮಾನ
Billava News

ಆಟಿದ ನೆಂಪು–2026: ಪವರ್‌ಲಿಫ್ಟಿಂಗ್ ಸಾಧಕಿ ಅಕ್ಷತಾ ಪೂಜಾರಿಗೆ ಯುವವಾಹಿನಿ ಬಜಪೆ ಘಟಕದಿಂದ ಸನ್ಮಾನ

ಆಟಿದ ನೆಂಪು–2026" ಕಾರ್ಯಕ್ರಮದಲ್ಲಿ ಕರಾವಳಿಯ ಹೆಮ್ಮೆಯ ಪವರ್‌ಲಿಫ್ಟಿಂಗ್ ಕ್ರೀಡಾಸಾಧಕಿ ಶ್ರೀಮತಿ ಅಕ್ಷತಾ ಪೂಜಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

1d ago