Skip to content
Billava News

ಬಿಲ್ಲವ ಮಹಿಳಾ ಘಟಕ ಮಲ್ಪೆ : 'ಆಟಿದ ನೆಂಪುಲೆಗ್ ಒಂಜಿ ದಿನ' ಕಾರ್ಯಕ್ರಮ

ಮಲ್ಪೆ, ಜು. 19: ಬಿಲ್ಲವ ಮಹಿಳಾ ಘಟಕ ಮಲ್ಪೆ ವತಿಯಿಂದ ಮಲ್ಪೆಯ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ "ಆಟಿದ ನೆಂಪುಲೆಗ್ ಒಂಜಿ ದಿನ" ಕಾರ್ಯಕ್ರಮ ಭಾನುವಾರ ನಡೆಯಿತು.

ಬಿಲ್ಲವ ಮಹಿಳಾ ಘಟಕ ಮಲ್ಪೆ : 'ಆಟಿದ ನೆಂಪುಲೆಗ್ ಒಂಜಿ ದಿನ' ಕಾರ್ಯಕ್ರಮ

ಮಲ್ಪೆ, ಜು. 19: ಬಿಲ್ಲವ ಮಹಿಳಾ ಘಟಕ ಮಲ್ಪೆ ವತಿಯಿಂದ ಮಲ್ಪೆಯ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ "ಆಟಿದ ನೆಂಪುಲೆಗ್ ಒಂಜಿ ದಿನ" ಕಾರ್ಯಕ್ರಮ ಭಾನುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ಗೋಪಾಲ ಸಿ. ಬಂಗೇರ ವಹಿಸಿದ್ದರು.

IMG_3374.jpeg

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ರಾಘು ಪೂಜಾರಿ ಕಲ್ಮಂಜೆ ಅವರು ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಆಷಾಢ ಮಾಸದ ವಿಶೇಷ ತಿಂಡಿ-ತಿನಿಸುಗಳು ಹಾಗೂ ಆರೋಗ್ಯವರ್ಧಕ ಗಿಡಮೂಲಿಕೆಗಳ ಮಹತ್ವದ ಕುರಿತು ಉಪನ್ಯಾಸ ನೀಡಿ, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಅಗತ್ಯವನ್ನು ಒತ್ತಿಹೇಳಿದರು. ಇದೇ ಸಂದರ್ಭದಲ್ಲಿ ಬಿಲ್ಲವ ಮಹಿಳಾ ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ನಿರೀಕ್ಷಾ ಮೆಂಡನ್ ಭಾಗವಹಿಸಿದ್ದರು.

IMG_3377.jpeg

ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಶ್ರೀ ರತ್ನಾಕರ್ ಅಮೀನ್, ಪ್ರಧಾನ ಕಾರ್ಯದರ್ಶಿ ಶ್ರೀ ಮನೋಹರ್ ಜತ್ತನ್, ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಶಾಲಾಡಳಿತ ಸಮಿತಿ ಅಧ್ಯಕ್ಷ ಶ್ರೀ ನವೀನ್ ಚಂದ್ರ ಮಲ್ಪೆ, ಭಜನಾ ಸಂಚಾಲಕ ಶ್ರೀ ಎಂ. ಜಗದೀಶ್ ಬಂಗೇರ, ನಾರಾಯಣಗುರು ಸೇವಾದಳದ ಅಧ್ಯಕ್ಷ ಶ್ರೀ ಜಯ ಅಮೀನ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಶ್ರೀಮತಿ ವಾರಿಜ ಮಧುಸೂದನ್, ಮಾಜಿ ಅಧ್ಯಕ್ಷೆಯರಾದ ಶ್ರೀಮತಿ ವಿಜಯ ಜಿ. ಬಂಗೇರ, ಶ್ರೀಮತಿ ಗೀತಾ ಬಿ. ಪೂಜಾರಿ, ಶ್ರೀಮತಿ ಪ್ರಭಾವತಿ ಯಾದವ್, ಶ್ರೀಮತಿ ಆಶಾ ಜಗದೀಶ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ ಘಟಕದ ಸದಸ್ಯೆಯರು ತಯಾರಿಸಿದ 40 ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಅವುಗಳ ಪರಿಚಯವನ್ನು ಶ್ರೀಮತಿ ಜಯಲಕ್ಷ್ಮೀ ಶೇಖರ್ ಮಾಡಿಕೊಟ್ಟರು.

IMG_3372.jpeg

ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಾಲಿನಿ ರವಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಜಾತಾ ಕೃಷ್ಣ ವಂದಿಸಿದರು. ಸದಸ್ಯೆಯರಾದ ಶ್ರೀಮತಿ ಲತಾ ಜಯಕರ್, ಶ್ರೀಮತಿ ಶಿಲ್ಪಾ ನವೀನ್ ಹಾಗೂ ಶ್ರೀಮತಿ ಸರೋಜಿನಿ ಪ್ರಾರ್ಥನೆ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಭಾಗ್ಯಶ್ರೀ ಎಂ. ಕಾರ್ಯಕ್ರಮ ನಿರೂಪಿಸಿದರು.

Found this useful? Share it.
Share

Relatedಸಂಬಂಧಿತ

ಯುವವಾಹಿನಿ ಕೊಲ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ: ₹1 ಲಕ್ಷ 43 ಸಾವಿರ ವಿದ್ಯಾನಿಧಿ ವಿತರಣೆ
Billava News

ಯುವವಾಹಿನಿ ಕೊಲ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ: ₹1 ಲಕ್ಷ 43 ಸಾವಿರ ವಿದ್ಯಾನಿಧಿ ವಿತರಣೆ

ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

7h ago
ನಾರಾಯಣಗುರು ಒಕ್ಕೂಟ ರಚನೆಗೆ ಸಮಾಜದ ರಾಜಕೀಯ ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ
Billava News

ನಾರಾಯಣಗುರು ಒಕ್ಕೂಟ ರಚನೆಗೆ ಸಮಾಜದ ರಾಜಕೀಯ ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ

ಸಮಾಜದ ಏಕತೆ, ವಿವಿಧ ಸಂಘಟನೆಗಳ ಸಮನ್ವಯ ಹಾಗೂ ಬಲಿಷ್ಠ "ನಾರಾಯಣಗುರು ಒಕ್ಕೂಟ" ರಚಿಸುವ ಉದ್ದೇಶದಿಂದ ಸಮಾಜದ ರಾಜಕೀಯ ಜನಪ್ರತಿನಿಧಿಗಳ ರಾಜ್ಯಮಟ್ಟದ ಸಮಾಲೋಚನಾ ಸಭೆ ಗುರುವಾರ ಬೆಳಿಗ್ಗೆ ಬೆಂಗಳೂರಿನ ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್ ಹೋಟೆಲ್‌ನಲ್ಲಿ ನಡೆಯಿತು.

10h ago
ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ
Billava News

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

1d ago
ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. 2ನೇ ಬಾರಿಗೆ ಅವಿರೋಧ ಆಯ್ಕೆ
Billava News

ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. 2ನೇ ಬಾರಿಗೆ ಅವಿರೋಧ ಆಯ್ಕೆ

ದುಬೈ: ಯುಎಇಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆಯ 2026-2028ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 11, 2026ರಂದು ದುಬೈಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ನಡೆಯಿತು.

1d ago